Monday, June 29, 2026
Home ಕರ್ನಾಟಕ BNB ಫೌಂಡೇಶನ್ಸ್ ವತಿಯಿಂದ ಮಗುವಿಗೆ ಧನ ಸಹಾಯ

BNB ಫೌಂಡೇಶನ್ಸ್ ವತಿಯಿಂದ ಮಗುವಿಗೆ ಧನ ಸಹಾಯ

0 comments

ಆಲಮೇಲ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ದಿನಗಳ ಹಿಂದೆ ಸುರಿದ ಅಕಾಲಿಕ ಗಾಳಿ-ಮಳೆಯ ಭೀಕರ ಆರ್ಭಟಕ್ಕೆ ತುತ್ತಾಗಿ, ಮನೆಯ ಮೇಲ್ಛಾವಣಿ ಕುಸಿದು ಬಿದ್ದು ದಿ ಗುರುನಾಥ ಬಡಿಗೇರ ಮತ್ತು ಅವರ ಇಡೀ ಕುಟುಂಬವೇ ದುರದೃಷ್ಟವಶಾತ್ ಸಾವನ್ನಪ್ಪಿದ್ದ ಈ ಹಿನ್ನೆಲೆಯಲ್ಲಿ ಸಿಂದಗಿ ವೀಧಾನಸಭಾ ಮತಕ್ಷೇತ್ರದ BJP ಪಕ್ಷದ ಮುಖಂಡರಾದ ಸನ್ಮಾನ್ಯ ಶ್ರೀ ಶ್ರೀಶೈಲಗೌಡ ಬಿರಾದಾರ ಅವರು ಇಂದು ಮೃತರ ಮನೆಗೆ ಖುದ್ದಾಗಿ ಭೇಟಿ ನೀಡಿ, ಮೃತರ ಉಳಿದ ಕುಟುಂಬದ ಸದಸ್ಯರನ್ನು ಹಾಗೂ ಸಮಾಜದ ಮುಖಂಡರನ್ನು ಭೇಟಿಯಾಗಿ ಅಗಲಿದ ಆತ್ಮಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ,ಕುಟುಂಬಸ್ಥರಿಗೆ ನಿಮ್ಮ ದುಃಖದಲ್ಲಿ ನಾವೂ ಭಾಗಿಗಳಾಗಿದ್ದೇವೆ. ದೇವರು ನಿಮಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ” ಎಂದು ಸಾಂತ್ವನ ಹೇಳಿದರು.

ಘಟನಾ ಸ್ಥಳವನ್ನು ವೀಕ್ಷಿಸಿ ಅವರು, ಮೃತರ ಹತ್ತಿರದ ಬಂಧುಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತನಾಡಿ ದುಃಖ ಹಂಚಿಕೊಂಡರು. ಪ್ರಕೃತಿಯ ಈ ವಿಕೋಪಕ್ಕೆ ಹಸನ್ಮುಖಿಯಾಗಿದ್ದ ಇಡೀ ಕುಟುಂಬವೇ ಬಲಿಯಾಗಿರುವುದು ಅತ್ಯಂತ ಕರುಣಾಜನಕ ಹಾಗೂ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ ಮತ್ತು ಗ್ರಾಮವನ್ನೇ ಕಣ್ಣೀರಿಡುವಂತೆ ಮಾಡಿದೆ ಎಂದು ತೀವ್ರ ಕಳಕಳಿ ವ್ಯಕ್ತಪಡಿಸಿದರು.

ಇಡೀ ಕುಟುಂಬವನ್ನು ಕಳೆದುಕೊಂಡ ಈ ಮಗುವಿನ ನೋವು ಯಾರಿಗೂ ಬಾರದಿರಲಿ. ಈ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡ ಮಗುವಿಗೆ ಆರ್ಥಿಕ ಆಸರೆಗಿಂತ ಹೆಚ್ಚಾಗಿ ಸಾಮಾಜಿಕ ಭದ್ರತೆಯ ಅಗತ್ಯವಿದೆ.

ಗುವಿನ ಮುಂದಿನ ಜೀವನ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀಶೈಲಗೌಡ ಬಿರಾದಾರ ಅವರು ತಮ್ಮ BNB ಫೌಂಡೇಶನ್ಸ್ ವತಿಯಿಂದ ಮಗುವಿಗೆ ಧನಸಹಾಯ ಮಾಡಿ, ಮಗುವಿನ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಫೌಂಡೇಶನ್ ವತಿಯಿಂದ ಅಗತ್ಯವಿರುವ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಭರವಸೆಯನ್ನು ನೀಡಿದರು

ಈ ಸಂದಭ೯ದಲ್ಲಿ ವಿಶ್ವಕಮ೯ ಸಮಾಜದ ಪರಮ ಪೂಜ್ಯ ಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಸಿಂದಗಿ ತಾಲೂಕ ಗಾಣಿಗ ಸಮಾಜದ ಮಾಜಿ ಅದ್ಯಕ್ಷರು ಮಲ್ಲಣ್ಣ ಮನಗೂಳಿ, ಗ್ರಾಮದ ನಮ್ಮ ಪಕ್ಷದ ಕಾಯ೯ಕತ೯ರಾದ ನವೀನಕುಮಾರ ನೇಲ್ಲಗಿ, ತಮ್ಮಣ್ಣಗೌಡ ಬೋನಾಳ, ವೀಶ್ವನಾಥ ಬೆಳಗುಂಪಿ, ಅನೀಲ ಕೋಣಶಿರಸಗಿ, ಇರಪಾನ ಜಾಲಿಗೀಡ, ಕನ್ನಯ ಕೇರಿಗೋಂಡ, ಈರಣ್ಣ ವೀಶ್ವಕಮ೯, ಭಗವಂತ್ರಾಯ ಕಕ್ಕಳಮೇಲಿ ರಾವುತರಾಯ ಗುಗ್ಗರಿ, ಅವರು ಸೇರಿದಂತೆ ಅನೇಕರು ಉಪಸ್ಥೀತರಿದ್ದರು 

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign

ರೈತರಿಗೆ ಬೆಳೆ ವಿಮೆ - ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ   ಮಲ್ಲಿಕಾರ್ಜುನ ಪಗಡೆ ರವರ ಮೇಲೆ ಪ್ರಕರಣ ಧಾಖಲಿಸಿರುವದು ಖಂಡನೆ : ಪತ್ರಕರ್ತ ಮಲ್ಲು ಬಗಲೂರ   PSI ಮುದರೆಡ್ಡಿ ಹಾಗೂ ಎಸ್‌ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ಪೊಲೀಸರ ಬಲೆಗೆ   ವಿದ್ಯುತ್ ಖಾಸಗಿಕರಣ ವಿರೋಧಿಸಿದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ರೈತ ಮುಖಂಡರ ನಿಯೋಗ   ಆರ್‌ಎಸ್‌ಎಸ್ ಜಪ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ದುರಾಡಳಿತ ಮುಚ್ಚಿಕೊಳ್ಳಲು RSS ಟೀಕಿಸುವುದನ್ನು ನಿಲ್ಲಿಸಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ