ವಿದ್ಯುತ್ ಖಾಸಗಿಕರಣ ವಿರೋಧಿಸಿದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷರಾದ ರವಿಕುಮಾರ್ ಅವರನ್ನು ಕೆಇಆರ್ಸಿ ಕಚೇರಿಯಲ್ಲಿ ಭೇಟಿ ಮಾಡಿ. ಖಾಸಗಿ ವಿದ್ಯುತ್ ಸರಬರಾಜಿಗಾಗಿ ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಲಾಯಿತು. ಆಯೋಗದ ಅಧ್ಯಕ್ಷರು ಮನವಿ ಸ್ವೀಕರಿಸಿ ಅಂತಿಮ ದಿನಾಂಕ ಜೂನ್ 23 ಮುಗಿದ ನಂತರ ಎರಡು ಕಡೆಯ ಅರ್ಜಿದಾರರ ದೂರುಗಳ ಬಗ್ಗೆ ಜಿಲ್ಲಾ ತಾಲೂಕು ಮಟ್ಟದಲ್ಲಿ ವಿಚಾರಣೆ ನಡೆಸಿ ಸಾಧಕ ಬಾದಕಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ರೈತ ಮುಖಂಡರ ನಿಯೋಗದಲ್ಲಿ ಅತ್ತಹಳ್ಳಿ ದೇವರಾಜ್. ಬರಡನಪುರ ನಾಗರಾಜ್. ಹೆಗೂರು ರಂಗರಾಜ್. ಮಿಲಿಟರಿ ಕುಮಾರ್. ಮೇಘಲಕೊಪ್ಪಲು ಕುಮಾರ್ . ಚಿಕ್ಕಬಳ್ಳಾಪುರ ಶ್ರೀನಿವಾಸ ರೆಡ್ಡಿ. ಬೈರಾರೆಡ್ಡಿ. ಶಾಂತಮ್ಮ. ಉಮಾದೇವಿ
ಇನ್ನು ಮುಂತಾದವರು ಇದ್ದರು