ಮಲ್ಲಿಕಾರ್ಜುನ ಪಗಡೆ ರವರ ಮೇಲೆ ಪ್ರಕರಣ ಧಾಖಲಿಸಿರುವದು ಖಂಡನೆ : ಪತ್ರಕರ್ತ ಮಲ್ಲು ಬಗಲೂರ
ಬೇಲೂರ ರಸ್ತೆ ಕಾಮಗಾರಿಯ ಕುರಿತು ಸುದ್ದಿ ಪ್ರಸಾರ ಮಾಡಿದ ಕಲ್ಯಾಣ ಕರ್ನಾಟಕ ನ್ಯೂಸ್ ಚಾನಲ್ ಸಂಪಾದಕರಾದ ಮಲ್ಲಿಕಾರ್ಜುನ ಪಗಡೆ ವಿರುದ್ಧ ಎಫ್,ಐ,ಆರ್ ದಾಖಲಿಸಿರುವುದು, ಸಾರ್ವಜನಿಕ ಹಿತಾಸಕ್ತಿಯ ವರದಿಗಳನ್ನು ಹತ್ತಿಕ್ಕಲು ( FIR ) ಅನ್ನುವ ಅಸ್ತ್ರವನ್ನು ಬಳಸಿದಾಗ ಮಾಧ್ಯಮದ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ , ಎಂದು ಪತ್ರಕರ್ತ ಮಲ್ಲು ಬಗಲೂರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಪತ್ರಕರ್ತರ ಮೇಲೆ ಸುಳ್ಳು ಮೊಕದ್ದಮೆ (FIR) ದಾಖಲಿಸುವುದು ಅಥವಾ ಕಿರುಕುಳ ನೀಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೊಡ್ಡ ಹಲ್ಲೆಯಾಗಿದೆ. ಪಾರದರ್ಶಕತೆ ಮತ್ತು ಸತ್ಯವನ್ನು ಹೊರಹಾಕುವ ಪತ್ರಕರ್ತರ ಕೆಲಸಕ್ಕೆ ಇದು ಅಡ್ಡಿಯುಂಟು ಮಾಡುತ್ತದೆ. ಪ್ರಸ್ತುತ ನಡೆಯುತ್ತಿರುವ ಇಂತಹ ಘಟನೆಗಳು ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ಮತ್ತು ನಾಗರಿಕರ ಹಕ್ಕುಗಳಿಗೆ ಧಕ್ಕೆ ತರುತ್ತವೆ. ಕೊಡಲೇ ಮಲ್ಲಿಕಾರ್ಜುನ ಪಗಡೆ ಅವರ ವಿರುದ್ಧ ದಾಖಲಿಸಿದ (FIR) ರದ್ದು ಗೊಳಿಸಿಬೇಕು